Website designed by @coders.knowledge.

Website designed by @coders.knowledge.

5 Lost Ancient Indian Technologies | ಕಳೆದುಹೋದ ಪ್ರಾಚೀನ ಭಾರತದ ಐದು ತಂತ್ರಜ್ಞಾನಗಳು

Watch Video

ಭಾರತೀಯ ನಾಗರೀಕತೆಯು ವಿಶ್ವದ ಅತ್ಯಂತ ಹಳೆಯ ನಾಗರಿಕತೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಭಾರತವು ಅತ್ಯಂತ ವೇಗದಲ್ಲಿ ಅಭಿವೃದ್ದಿ ಹೊಂದುತ್ತಿದೆ. ಭಾರತದ ಜನಸಂಖ್ಯೆಯ ಸುಮಾರು 80% ಹಿಂದೂಗಳು ಮತ್ತು ಆ ಹಿಂದು ಧರ್ಮವನ್ನು ನಂಬುವವರು ತಮ್ಮ ದೇವರು ಮತ್ತು ದೇವತೆಗಳನ್ನು ಪ್ರಾಚೀನ ಕಾಲದಲ್ಲಿ ವಾಸಿಸುತ್ತಿದ್ದ ಮಾನವರು ಮಾತ್ರವಲ್ಲದೆ, ಅವರು ಭೂಮ್ಯಾತೀತ ಶಕ್ತಿಶಾಲಿ ಜೀವಿಗಳು ಎಂದು ನಂಬುತ್ತಾರೆ. ಅಲ್ಲದೆ ಅವರು ನಮ್ಮ ಜಗತ್ತಿನಲ್ಲಿ ಕಾಲಕಾಲಕ್ಕೆ ನಾಗರಿಕತೆಯನ್ನು ರೂಪಿಸಲು ಬರುತ್ತಾರೆ. ಭಾರತೀಯ ನಾಗರೀಕತೆಯು 5000 ವರ್ಷಗಳಿಗಿಂತ ಹೆಚ್ಚಿನ ಇತಿಹಾಸವನ್ನು ಹೊಂದಿದೆ ಪವಿತ್ರ ಪ್ರಾಚೀನ ಗ್ರಂಥಗಳು, ಹಸ್ತಪ್ರತಿಗಳು ಮತ್ತು ಇತರ ಪುಸ್ತಕಗಳು ಪ್ರಾಚೀನ ಕಾಲದಲ್ಲಿ ಭಾರತೀಯ ನಾಗರೀಕತೆಯು ತಾಂತ್ರಿಕವಾಗಿ ಮುಂದುವರಿದ ನಾಗರಿಕತೆಯಾಗಿತ್ತು ಎಂದು ಸೂಚಿಸುತ್ತವೆ. ಕಳೆದು ಹೋದ ಅನೇಕ ಪ್ರಾಚೀನ ಭಾರತೀಯ ತಂತ್ರಜ್ಞಾನಗಳ ಬಗ್ಗೆ ಇಲ್ಲಿ ನಾವು ತಿಳಿಸುತ್ತಿದ್ದೇವೆ.

1. ಸಿರ್ಪುರ್ ನ ಸುರಂಗ ತಿಲಾ ಮಂದಿರ.

surang thila mandir

ಈ ದೇವಾಲಯವನ್ನು ಕ್ರಿ.ಶ. 7ನೇ ಶತಮಾನದಲ್ಲಿ ನಿರ್ಮಿಸಲಾಗಿತ್ತು ಮತ್ತು ಇದನ್ನು ಇತ್ತೀಚಿಗೆ ಕಂಡುಹಿಡಿಯಲಾಗಿದೆ. ಕ್ರಿ.ಶ. 11ನೇ ಶತಮಾನದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಈ ದೇವಾಲಯವು ಭೂಮಿಯ ಕೆಳಗೆ ಹೂತು ಹೋಯಿತು. ಆದರೆ ಇದರ ಹೊರತಾಗಿಯೂ ಇದರ ಬಹುಪಾಲು ಭಾಗವು ಇನ್ನೂ ಉಳಿದಿದೆ. ಪುರಾತತ್ವ ತಜ್ಞರ ಪ್ರಕಾರ ಇದನ್ನು ನಿರ್ಮಿಸಲು ಸುಧಾರಿತ ತಂತ್ರವನ್ನು ಬಳಸಲಾಯಿತು. ಇದನ್ನು ಆಯುರ್ವೇದ ಅಥವಾ ವೈದಿಕ ನಿರ್ಮಾಣ ಎಂದು ಕರೆಯಲಾಗುತ್ತದೆ. ಪ್ರಾಚೀನ ವಿಜ್ಞಾನ ಮತ್ತು ವೈದಿಕ ಲಿಪಿಯಲ್ಲಿ ಬರೆದ ತಂತ್ರಗಳನ್ನು ಬಳಸಿ ಅವರು ಈ ದೇವಾಲಯವನ್ನು ನಿರ್ಮಿಸಿದ್ದರು. ಅದರ ಬಹುದೊಡ್ಡ ಭಾಗವನ್ನು ಪುನರ್ನಿರ್ಮಿಸಲಾಗಿದ್ದರೂ ಇಂದಿಗೂ ಆಯುರ್ವೆದ ಕಾರ್ಯಕ್ಕೆ ಸಂಬಂಧಿಸಿದ ಕಲ್ಲುಗಳು ಮತ್ತು ಕಲಾಕೃತಿಗಳು ಇಲ್ಲಿ ಕಾಣಬಹುದು.

ಸಿಮೆಂಟ್ ಬಳಸಿ ನಿರ್ಮಿಸಲಾದ ಆಧುನಿಕ ಕಟ್ಟಡಗಳು ಸಾಮಾನ್ಯವಾಗಿ 70 ರಿಂದ 80 ವರ್ಷಗಳವರೆಗೆ ಇರುತ್ತವೆ. ಆದರೆ ಆಯುರ್ವೆದ ಕೃತಿಗಳ ನಿರ್ಮಾಣಗಳು 1600 ವರ್ಷಗಳು ಕಳೆದರೂ ಇರುತ್ತವೆ. ಬಂಡೆಗಳನ್ನು ಬಂಧಿಸಲು ಬಳಸಿದ ಪ್ರಾಚೀನ ಆಯುರ್ವೇದ ಮಿಶ್ರಣವು ಇಂದು ನಾವು ಬಳಸುವ ಕಾಂಕ್ರೀಟ್ ಮಿಶ್ರಣಕ್ಕಿಂತ 20 ಪಟ್ಟು ಹೆಚ್ಚು ಪ್ರಬಲವಾಗಿದೆ ಎಂದು ಕಂಡುಬಂದಿದೆ. ಈ ಆಯುರ್ವೇದ ಮಿಶ್ರಣವನ್ನು ತಯಾರಿಸುವ ಸಂಪೂರ್ಣ ವಿವರಗಳು ಪ್ರಾಚೀನ ಭಾರತೀಯ ಲಿಪಿ ಮಾಯಾ ಮಂಟಂನಲ್ಲಿ ಕಂಡುಬರುತ್ತದೆ. ಆ ಯುಗದಲ್ಲಿಯೂ ಸಹ ಸುರಂಗ್ ತಿಲಾ ದೇವಸ್ಥಾನದಲ್ಲಿ ಅನೇಕ ಭೂಕಂಪನ ವಿರೋಧಿ ತಂತ್ರಗಳನ್ನು ಬಳಸಲಾಗುತ್ತಿತ್ತು. ದೇವಾಲಯದ ಒಳಗೆ ಅನೇಕ ಸ್ಥಳಗಳಲ್ಲಿ ಸುಮಾರು 80 ಅಡಿ ಉದ್ದದ ನದಿ ಮುಖಗಳೂ ಇದ್ದವು. ಇದು ಭೂಕಂಪಗಳ ಪ್ರಭಾವವನ್ನು ಕಡಿಮೆ ಮಾಡುವಂತಹ ಗಾಳಿಯ ಪ್ಯಾಕೆಟ್ಗಳನ್ನು ಮಾಡುತ್ತವೆ.

2. ವಾಯುವ್ಯ ಭಾರತದ ಸಿಂಧೂ ಕಣಿವೆ(ಈಗ ಪಾಕಿಸ್ತಾನ).

ancient indian medicines

ಜೂನ್ 2011ರಂದು ಪಳೆಯುಳಿಕೆ ವಿಜ್ಞಾನಿಗಳು ಸಿಂಧೂ ಕಣಿವೆಯಲ್ಲಿ 4300 ವರ್ಷಗಳಷ್ಟು ಹಳೆಯದಾದ ತಲೆಬುರುಡೆಯನ್ನು ಕಂಡುಕೊಂಡರು. ಆ ತಲೆಬುರುಡೆಯನ್ನು ಪರೀಕ್ಷಿಸಿದಾಗ ಅದರಲ್ಲಿ ಹಲವು ರಂಧ್ರಗಳಿವೆ. ಫಲಿತಾಂಶಗಳ ಆಘಾತಕಾರಿ, ಆ ವ್ಯಕ್ತಿಯ ತಲೆಬುರುಡೆಗೆ ಮೆದುಳಿನ ಶಸ್ತ್ರಚಿಕಿತ್ಸೆ ಕೂಡ ಯಶಸ್ವಿಯಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಏಕೆಂದರೆ ಅದರಲ್ಲಿ ಗಾಯವನ್ನು ಗುಣಪಡಿಸುವ ಕುರುಹುಗಳಿವೆ. ಪ್ರಾಚೀನ ಹಿಂದೂಗಳು ಮೆದುಳಿನ ಶಸ್ತ್ರ ಚಿಕಿತ್ಸೆಯನ್ನು ಮಾಡುತ್ತಿದ್ದರು ಮತ್ತು ವೈದ್ಯಕೀಯ ಚಿಕಿತ್ಸೆ ತಂತ್ರಗಳು ಆ ಸಮಯದಲ್ಲಿ ಸಾಕಷ್ಟು ಮುಂದುವರಿದಿದ್ದವು ಎಂದು ವೈದಿಕ ವಿದ್ವಾಂಸರು ನಂಬಿದ್ದಾರೆ.

ಈ ಪ್ರಾಚೀನ ಭಾರತೀಯ ವೈದ್ಯಕೀಯ ಜ್ಞಾನವನ್ನು ಸುಮಾರು 2,800 ವರ್ಷಗಳ ಹಿಂದೆ ಸುಶ್ರುತ ಸಂಹಿತಾ ಎಂಬ ಪುಸ್ತಕದಲ್ಲಿ ಬರೆಯಲಾಗಿದೆ. ಈ ಪುಸ್ತಕವು 11,000ಕ್ಕೂ ಹೆಚ್ಚು ರೋಗಗಳ ಚಿಕಿತ್ಸೆಯ ವಿಧಾನಗಳನ್ನು ಒಳಗೊಂಡಿದೆ. ಇದು 700ಕ್ಕೂ ಹೆಚ್ಚು ಔಷಧೀಯ ಸಸ್ಯಗಳ ಬಗ್ಗೆ, ಔಷಧೀಯ ಗುಣಗಳನ್ನು ಹೊಂದಿರುವ 64 ಖನಿಜಾಂಶಗಳ ಬಗ್ಗೆ, ಪ್ರಾಣಿಗಳಿಂದ ತಯಾರಿಸಿದ 57 ಔಷಧಿಗಳ ಬಗ್ಗೆ ಮಾಹಿತಿಯನ್ನು ಹೊಂದಿದೆ. ಸುಶ್ರುತ ಅವರನ್ನು ಪ್ಲಾಸ್ಟಿಕ್ ಸರ್ಜರಿಯ ಪಿತಾಮಹ ಎಂದು ಪರಿಗಣಿಸಲಾಗುತ್ತದೆ. ಅವರು ಕ್ರಿ.ಪೂ. 1000 ಮತ್ತು 800ರ ನಡುವೆ ಭಾರತದಲ್ಲಿ ಎಲ್ಲೋ ವಾಸಿಸುತ್ತಿದ್ದರು. ಆಯುರ್ವೇದದಲ್ಲಿನ ಪ್ರಾಚೀನ ಔಷಧೀಯ ವ್ಯವಸ್ಥೆಯ ವಿವರವಾದ ಚಿಕಿತ್ಸೆಯು ಮಾಹಿತಿಯೊಂದಿಗೆ ವಿಶ್ವದ ಹಳೆಯ ವೈದ್ಯಕೀಯ ವಿಜ್ಞಾನವೆಂದು ಪರಿಗಣಿಸಲ್ಪಟ್ಟಿದೆ.

3. ಪ್ರಾಚೀನ ವಿಮಾನ ತಂತ್ರಜ್ಞಾನ.

ancient indian airplane technology

ಮುಂಬೈ ವಿಶ್ವವಿದ್ಯಾಲಯದಲ್ಲಿ ಜನವರಿ 2015ರಲ್ಲಿ ಭಾರತೀಯ ವಿಜ್ಞಾನ ಕಾಂಗ್ರೆಸ್ ಪ್ರಾಚೀನ ಭಾರತಿಯ ಏರೋಸ್ಪೇಸ್ ವಿಜ್ಞಾನದ ಉನ್ನತ ಇಂಜಿನಿಯರ್ಗಳೊಂದಿಗೆ ಚರ್ಚೆ ನಡೆಸಿತ್ತು. ಅವರು ಭಾರತದ ಪ್ರಾಚೀನ ಎರೊನಾಟಿಕ್ಸ್ ವಿಜ್ಞಾನದ ಬಗ್ಗೆ ಚರ್ಚಿಸಿದ್ದರು. ಪ್ರಾಚೀನ ಭಾರತೀಯ ಏರೋಸ್ಪೇಸ್ ತಂತ್ರಜ್ಞಾನವು ವಿವರವಾದ ದಾಖಲಾತಿಗಳನ್ನು ಹೊಂದಿದೆ ಮತ್ತು ಅನೇಕ ರೀತಿಯ ವಿಮಾನಗಳನ್ನು ನಿರ್ಮಿಸುವ ವಿಧಾನಗಳನ್ನು ಸಹ ಹೊಂದಿದೆ. 1895ರಲ್ಲಿ ರೈಟ್ ಬ್ರದರ್ಸ್ ನಡೆಸಿದ ಹಾರಾಟ ಪರೀಕ್ಷೆಗಳಿಗೆ 8 ವರ್ಷಗಳ ಮೊದಲು, ಭಾರತೀಯ ತಾಂತ್ರಿಕ ಬೋಧಕ ಶಿವಕರ್ ಬಾಪೂಜಿ ತಲ್ಪಾಡೆ ಅವರು ಮಾನವ ರಹಿತ ವಿಮಾನದ ಪರೀಕ್ಷೆಯನ್ನು ನಡೆಸಿದರು.

ಮುಂಬೈನ ಕಡಲ ತೀರದಲ್ಲಿ ನೂರಾರು ಸಾಕ್ಷಿಗಳ ಮುಂದೆ ವಿಮಾನವನ್ನು ಪರೀಕ್ಷಿಸಲಾಯಿತು. ಅದು 1,500 ಅಡಿ ಎತ್ತರಕ್ಕೆ ಹಾರಿತು. ಅವರು ಪ್ರಾಚೀನ ವಿಮಾನದಿಂದ ಸ್ಫೂರ್ತಿ ಪಡೆದರು, ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖಿಸಲಾದ ತಂತ್ರಜ್ಞಾನದಿಂದ ಅವರು ಆ ವಿಮಾನವನ್ನು ಮಾಡಿದ್ದರು. 2017ರಲ್ಲಿ ಕಾವ್ಯ ವಡ್ಡಾಡಿ ಹಳೆಯ ಪಠ್ಯಗಳಲ್ಲಿ ಉಲ್ಲೇಖಿಸಿರುವಂತೆ ಪ್ರಾಚೀನ ವಿಮಾನದ ಡಿಜಿಟಲ್ 3ಡಿ ಮಾದರಿಯನ್ನು ಮರುಸೃಷ್ಟಿಸಲು ಸಾಧ್ಯವಾಯಿತು. ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಲ್ಲಿ ಆ 3ಡಿ ಮಾದರಿಯನ್ನು ವಿಂಡ್ ಟನಲ್ನಲ್ಲಿ ಪರೀಕ್ಷಿಸಲಾಗಿದೆ ಮತ್ತು ಆ ವಿಮಾನದ ಫಲಿತಾಂಶಗಳು ಆಶ್ಚರ್ಯಕರವಾಗಿ ಬಂದವು. ಅದು ಎಲ್ಲ ವಿಮಾನದ ಏರ್ಪ್ರೆಮ್ನಂತೆಹೆ ಸಕಾರಾತ್ಮಕ ಫಲಿತಾಂಶವನ್ನು ತೋರಿಸಿದೆ.

4. ಪ್ರಾಚೀನ ಪರಮಾಣು ತಂತ್ರಜ್ಞಾನ.

ancient indian weapon

ಶ್ರೀಮದ್ಭಗವದ್ಗೀತೆ ಪ್ರಾಚೀನ ಭಾರತೀಯ ಮಹಾಕಾವ್ಯ, ಮಹಾಭಾರತದ ಪ್ರಮುಖ ಭಾಗವಾಗಿದೆ. ಭಗವದ್ಗೀತೆಯಲ್ಲಿ 18 ಅಧ್ಯಾಯಗಳಿವೆ ಮತ್ತು ಇದು ಪ್ರಾಚೀನ ಪರಮಾಣು ವಿಜ್ಞಾನದ ಬಗ್ಗೆ ಗುಪ್ತ ರಹಸ್ಯಗಳನ್ನು ಹೊಂದಿದೆ. Father of Nuclear Bomb ಆದ ರಾಬರ್ಟ್ ಓಪೆನ್ ಹೈಮರ್ ಮೊದಲ ಪರಮಾಣುವನ್ನು ಅಭಿವೃದ್ಧಿಪಡಿಸುವಾಗ ಭಾರತೀಯ ಪಠ್ಯಗಳಿಂದ ಪ್ರೇರಿತರಾಗಿದ್ದರೆಂದು ನಂಬಲಾಗಿದೆ. ಅವರು ಸಂಸ್ಕೃತ ಭಾಷೆಯನ್ನು ಕಲಿತಿದ್ದರು ಮತ್ತು ಭಗದ್ಗೀತೆಯನ್ನು ಓದುತ್ತಿದ್ದರು.

1992ರಲ್ಲಿ ಭಾರತದ ಥಾರ್ ಮರುಭೂಮಿಯಲ್ಲಿ ಮನೆಗಳನ್ನು ನಿರ್ಮಿಸಲು ಉತ್ಖನನ ನಡೆಸುತ್ತಿದ್ದಾಗ ಇಂಜಿನಿಯರ್ಗಳು ಅಲ್ಲಿನ ಮಣ್ಣಿನ ಮಾದರಿಗಳನ್ನು ತೆಗೆದುಕೊಂಡರು ಮತ್ತು ಅವರು ಮಣ್ಣಿನ ಕೆಳಗೆ ದಪ್ಪವಾದ ವಿಕಿರಣಶೀಲ ಚಿತಾಭಸ್ಮವನ್ನು ಪಡೆದರು. ಅದರ ತನಿಖೆ ನಡೆಸಿದಾಗ ಆ ದಪ್ಪವಾದ ಪದರವು 8,000 ದಿಂದ 12,000 ವರ್ಷಗಳಷ್ಟು ಹಳೆಯವು ಎಂದು ತಿಳಿಯಿತು. ಪ್ರಾಚೀನ ಕಾಲದಲ್ಲಿ ಪರಮಾಣು ಸ್ಫೋಟ ಸಂಭವಿಸಿದೆ ಎಂದು ನಂಬಲಾಗಿದೆ.

ಹಿಂದೂ ಧರ್ಮಗ್ರಂಥಗಳು ಬ್ರಹ್ಮನ ಆಯುಧವನ್ನು ಉಲ್ಲೇಖಿಸುತ್ತವೆ. ಅದರ ಹೆಸರು ಬ್ರಹ್ಮಾಸ್ತ್ರ. ಪರಮಾಣುವಿನಂತೆ ಬ್ರಹ್ಮಾಸ್ತ್ರ ಅತ್ಯಂತ ಶಕ್ತಿಶಾಲಿ ಅಸ್ತ್ರವಾಗಿತ್ತು ಎಂದು ನಂಬಲಾಗಿದೆ. ಇದನ್ನು ಎದುರಾಳಿಯ ಸೈನ್ಯವನ್ನು ಸಂಪೂರ್ಣವಾಗಿ ಅಳಿಸಿ ಹಾಕಲು ಬಳಸಲಾಗುತ್ತಿತ್ತು ಮತ್ತು ಇದನ್ನು ತಡೆಗಟ್ಟುವಂತೆ ಬಳಸಬಹುದು. ಇತ್ತೀಚಿನ ದಿನಗಳಲ್ಲಿ ದೇಶಗಳು ಪರಮಾಣುವನ್ನು ನಿರೋಧಕವಾಗಿ ಬಳಸುತ್ತವೆ. ಮರುಭೂಮಿಯಲ್ಲಿ ಕಂಡುಬರುವ ವಿಕಿರಣಶೀಲ ಬೂದಿ ಪ್ರಾಚೀನ ಭಾರತದಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು ಎಂಬುದಕ್ಕೆ ಪುರಾವೆಯೇ!!

5. ಪತ್ತೆಯಾಗದ ಪ್ರಾಚೀನ ಪಠ್ಯಗಳು.

ancient hindu scripts

ಭಾರತದ ನವದೆಹಲಿಯಲ್ಲಿ ನ್ಯಾಷನಲ್ ಮಿಷನ್ ಮನುಸ್ಕ್ರಿಪ್ಟ್ ವಿದ್ವಾಂಸರು 40 ಲಕ್ಷಕ್ಕೂ ಹೆಚ್ಚು ಪ್ರಾಚೀನ ಲಿಪಿಗಳನ್ನು ಸಂರಕ್ಷಿಸಲು ಬಯಸುತ್ತಾರೆ. ಇದನ್ನು ಪ್ರಾಚೀನ ಕಾಲದ ಅಪರೂಪದ ದಾಖಲಾತಿ ಎಂದು ಪರಿಗಣಿಸಲಾಗಿದೆ. ಈ ಪ್ರಾಚೀನ ಲೇಖನಗಳು ಪ್ರಾಚೀನ ತಂತ್ರಜ್ಞಾನಗಳಂತಹ ವಿಭಿನ್ನ ವಿಷಯಗಳಿಗೆ ಸಂಬಂಧಿಸಿದ್ದವು. ಅವುಗಳಲ್ಲಿ ಹಲವು ಬೋಜ್ ಪಾತ್ರದಲ್ಲಿ ಬರೆಯಲ್ಪಟ್ಟಿವೆ ಮತ್ತು ಜಗತ್ತಿನ ಅನೇಕ ಸ್ಥಳಗಳಲ್ಲಿ ಮರೆ ಮಾಡಲಾಗಿದೆ. ಈ ಸ್ಕ್ರಿಪ್ಟ್ ಗಳಲ್ಲಿ ಕೇವಲ 10% ಮಾತ್ರ ಮುದ್ರಿಸಲಾಗಿದೆ ಮತ್ತು ಸಂರಕ್ಷಿಸಲಾಗಿದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು.

ಅನೇಕ ಲಿಪಿಗಳು ಕಳೆದುಹೋಗಿವೆ ಮತ್ತು ಅದರ ಮೇಲಿನ ಬರಹಗಳು ಸಮಯದೊಂದಿಗೆ ಮರೆಯಾಗಿವೆ. ಪ್ರಾಚೀನ ಜನರು ಯಾವ ಮಾಹಿತಿಗಳನ್ನು ಹೊಂದಿದ್ದಾರೆಂದು ನಾವು ಎಂದಿಗೂ ತಿಳಿದುಕೊಳ್ಳುವುದಿಲ್ಲ. ನಮಗೆ ಪ್ರಾಚೀನ ಜ್ಞಾನವಿದ್ದರೆ ಹೇಗಿರುತ್ತಿತ್ತು ಎಂದು ಊಹಿಸಿ. ನಾವು ಆ ಲಿಪಿಗಳನ್ನು ಸಂರಕ್ಷಿಸಬೇಕಾಗಿದೆ, ಏಕೆಂದರೆ ಎಲ್ಲಾ ನಮ್ಮ ಇತಿಹಾಸದ ಬಗ್ಗೆ ತಿಳಿಸುತ್ತವೆ.

ಪ್ರಾಚೀನ ಕಾಲದಲ್ಲಿ ಅನೇಕ ಸುಧಾರಿತ ನಾಗರಿಕತೆಗಳು ಇದ್ದವು ಎಂದು ನಾನು ವೈಯಕ್ತಿಕವಾಗಿ ನಂಬುತ್ತೇನೆ. ಅದರ ಕುರುಹುಗಳು ಸಮಯದೊಂದಿಗೆ ಕಳೆದುಹೋಗಿವೆ. ಹಸ್ತಪ್ರತಿಗಳು ಮತ್ತು ಪಠ್ಯಗಳನ್ನು ಪ್ರಾಚೀನ ಸಂಸ್ಕೃತ ಭಾಷೆಯಲ್ಲಿ ಬರೆಯಲಾಗಿದೆ ಮತ್ತು ಈ ಪಠ್ಯಗಳು ಕೆಲವು ಕೇವಲ ಪುರಾಣಗಳನ್ನು ಉಪನ್ಯಾಸ ಮಾಡುವುದಿಲ್ಲ. ಈ ಪಠ್ಯಗಳು ಭಾರತದ ಪ್ರಾಚೀನ ವಾಸ್ತುಶಿಲ್ಪ, ಕರಕುಶಲ ವಸ್ತುಗಳು, ವಿಜ್ಞಾನ, ತಂತ್ರಜ್ಞಾನ, ಅರ್ಥಶಾಸ್ತ್ರ ಮತ್ತು ವೈದ್ಯಕೀಯ ಪ್ರಗತಿಯ ಬಗ್ಗೆ ತಿಳಿಸುತ್ತವೆ. ಈ ಎಲ್ಲಾ ಲಿಪಿಗಳು ಕಾದಂಬರಿ ಎಂದು ತಪ್ಪಾಗಿ ಅರ್ಥೈಸಲ್ಪಟ್ಟವು. ಆದರೆ ಅವುಗಳು ಕೆಲವು ರೀತಿಯ ವಾಸ್ತವತೆಯನ್ನು ತಮ್ಮಲ್ಲಿಯೇ ಇಟ್ಟುಕೊಂಡಿವೆ. ಅದನ್ನು ನಾವು ಇನ್ನೂ ನಿರ್ಲಕ್ಷಿಸುತ್ತಿದ್ದೇವೆ.

Mahithi Thana

More by this author

Similar category

Explore all our Posts by categories.

commenters

akash b huggi • March 8th,2022

Super information