Watch Video
ನಿಮಗೆ ಕೈ ಗೊಂಬೆ ಬಗ್ಗೆ ತಿಳಿದಿರುತ್ತದೆ. ಅದೇ ರೀತಿ ಈಗಿನ ಸಮಾಜದಲ್ಲಿ ನಾವೆಲ್ಲರೂ ಆಗಿದ್ದೇವೆ. ಏಕೆಂದರೆ ನಾವೆಲ್ಲರೂ ಬೇರೊಬ್ಬರ ಸಂಕೇತದಲ್ಲಿ ನಡೆಯುತ್ತಿದ್ದೇವೆ. ಆದರೆ ನಮ್ಮನ್ನು ನಿಯಂತ್ರಣ ಮಾಡುವವರು ಸಿಂಹದ ರೀತಿ ಶಕ್ತಿಶಾಲಿಯಾಗಿಲ್ಲ, ಬದಲಿಗೆ ಸಿಂಹದ ರೀತಿ ಮುಖವಾಡ ಹಾಕಿರುವ ಸರಾಸರಿ ಜನರಾಗಿರುತ್ತಾರೆ. ಕೈಗೊಂಬೆ ಕೆಳಗಿರುವ ತನಕ ನಿಯಂತ್ರಣದಲ್ಲಿ ಇರುತ್ತದೆ. ಆದರೆ ಅದು ಮಾತನಾಡಲು ಪ್ರಾರಂಭಿಸಿದಾಗ ಯಾವ ರೀತಿ ಇರುತ್ತದೆ. ಆಗ ಬೇಟೆಗಾರನೇ ಬೇಟೆಯಾಗುತ್ತಾನೆ. ಇದಕ್ಕಾಗಿ ನೀವು ಆ ಜನಗಳ ನಿಗೂಢ ಕೈಚಳಕ ತಂತ್ರದಿಂದ(dark manipulation technique) ಉಳಿದು ನಿಯಂತ್ರಣ ಮಾಡಬೇಕು. ಕಾಡಿನಂತ ಈ ಜಗತ್ತಿನಲ್ಲಿ ನೀವು ಸಿಂಹದಂತೆ ಇರಲು ಈ ಲೇಖನವನ್ನು ಕೊನೆವರೆಗೂ ಓದಿ.
ಇದನ್ನು ಓದಿ: ಕೇಂದ್ರೀಕೃತ ಯಶಸ್ಸನ್ನು ಸಾಧಿಸಲು Deep Work ನ ಅಗತ್ಯ ನಿಯಮಗಳುಇಂದು ಹುಲಿಗಳ ಸಂಖ್ಯೆ ಕಡಿಮೆಯಾಗಿದೆ, ಆದರೆ ನರಿಗಳ ಸಂಖ್ಯೆ ಅಧಿಕವಿದೆ. ಇದರ ಪ್ರಕಾರ, ನಿಜವಾದ ಶಕ್ತಿಯುತ ಜನರು ತುಂಬಾ ಕಡಿಮೆ ಇದ್ದಾರೆ. ಹೀಗಾಗಿ ಜೀವನದಲ್ಲಿ ಸಿಂಹದ ರೀತಿಯ ಜನರು ಕಡಿಮೆ ಮತ್ತು ತೋರಿಕೆಯ ಜನರು ಅಧಿಕ ಕಾಣಸಿಗುತ್ತಾರೆ. ಈ ರೀತಿಯ ಜನರನ್ನು ಗುರುತಿಸುವುದು ಮುಖ್ಯವಾಗಿದೆ. ಏಕೆಂದರೆ ಇವರು ನಿಮ್ಮನ್ನು ನಿಮ್ಮ ಕುಟುಂಬವನ್ನು ನಾಶ ಮಾಡುವಷ್ಟು ಶಕ್ತಿಶಾಲಿ ಇರುತ್ತಾರೆ. ಆದರೆ ಒಂದು ಮಾತು, ಸತ್ಯದ ಜೊತೆ ಯಾವಾಗಲೂ ನಡೆಯಿರಿ. ಇಲ್ಲದಿದ್ದರೆ ಕೆಟ್ಟ ಜನರು ನಿಮ್ಮನ್ನು ನಿಯಂತ್ರಣ ಮಾಡುತ್ತಾರೆ.
ಈ ಸರಾಸರಿ ಜನಗಳನ್ನು 3 ರೀತಿಯಲ್ಲಿ ಭಾಗ ಮಾಡಬಹುದು. ಇದರಲ್ಲಿ ಕೆಲವು ನರಿಗಳು ನಿಮ್ಮ ಸುತ್ತಮುತ್ತಲು ಇರುತ್ತಾರೆ, ಕೆಲವರು ನಿಮ್ಮಿಂದ ಸಾವಿರಾರು ಕಿಮೀ ದೂರವಿರುತ್ತಾರೆ. ನಿಮ್ಮ ಸುತ್ತಮುತ್ತಲು ಇರುವ ನರಿಗಳು ವೈಯಕ್ತಿಕ ಜೀವನವನ್ನು(personal life) ಮಾತ್ರ ಹಾಳು ಮಾಡುತ್ತಾರೆ. ಆದರೆ ದೂರವಿರುವವರು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ನಾಶ ಮಾಡುವಷ್ಟು ಶಕ್ತಿಯನ್ನು ಹೊಂದಿರುತ್ತಾರೆ. ಇನ್ನು 3ನೇ ರೀತಿ ನರಿಗಳು ನಿಮ್ಮನ್ನು ಮಾತ್ರವಲ್ಲ, ಬದಲಿಗೆ ಪೂರ್ತಿ ದೇಶವನ್ನೇ ನಾಶ ಮಾಡುವಷ್ಟು ಶಕ್ತಿಯನ್ನು ಹೊಂದಿರುತ್ತಾರೆ.
ಇದನ್ನು ಓದಿ: ಭಾರತವನ್ನು ಆವರಿಸಿರುವ ಗುಪ್ತ ಅಶ್ಲೀಲ ಬಿಕ್ಕಟ್ಟುಇದರಲ್ಲಿ ಮೊದಲಿಗೆ ಪೋಷಕರು ಬರುತ್ತಾರೆ. ಸಿಟ್ಟುಗೊಳ್ಳಬೇಡಿ, ಬದಲಿಗೆ ಪೂರ್ತಿ ವಿಷಯ ತಿಳಿಸಿದ ನಂತರ ಪ್ರತಿಕ್ರಿಯೆ ನೀಡಿ. ನಮ್ಮ ಪೋಷಕರು, ಭಯ ಹುಟ್ಟಿಸುವ(fear mongering) ನಿಗೂಢ ಕೈಚಳಕ ತಂತ್ರವನ್ನು ಬಳಸುತ್ತಾರೆ. ಇದು ನಮ್ಮನ್ನು ಯಾವಾಗಲೂ ಭಯದಲ್ಲಿ ಇರುವಂತೆ ಮಾಡುತ್ತದೆ. ಇದನ್ನು ದೊಡ್ಡ ದೊಡ್ಡ ಕಂಪನಿಗಳು ಬಳಸುತ್ತವೆ, ಆದರೆ ಕಂಪನಿ ಅದರ ಪ್ರಯೋಜನಕ್ಕಾಗಿ ಬಳಸಿದರೆ, ಪೋಷಕರು ನಮಗೆ ಒಳ್ಳೆಯದಾಗಲಿ ಎಂದು ಬಳಸುತ್ತಾರೆ.
ಪೋಷಕರು ಅವರ ಮಕ್ಕಳನ್ನು ಇಷ್ಟಪಡುತ್ತಾರೆ. ಹೀಗಾಗಿ ನಾವು ನೋವಿನ ಪರಿಸ್ಥಿತಿಯಲ್ಲಿ(painful situation) ಇರುವುದನ್ನು ಅವರು ಇಷ್ಟಪಡುವುದಿಲ್ಲ. ಆದರೆ ಇದನ್ನು ಪ್ರೀತಿ ಎನ್ನಲು ಸಾಧ್ಯವಿಲ್ಲ. ಏಕೆಂದರೆ ಪ್ರೀತಿಯಲ್ಲಿ ಬಂಧನದಲ್ಲಿ ಇರುವುದಿಲ್ಲ. "anything in excess is a poison" ಎನ್ನುವ ರೀತಿಯೇ, ಪೋಷಕರ ಈ ಅತಿಯಾದ ಪ್ರೀತಿಯು ಅವರ ಮಕ್ಕಳನ್ನು ಸ್ವತಂತ್ರ ಆಗುವುದರಿಂದ ತಡೆಯುತ್ತದೆ.
ಚಿಕ್ಕವನಿದ್ದಾಗ ಒಂದು ಕಥೆ ಕೇಳಿದ್ದೇನು, ಒಬ್ಬ ಶಿಕ್ಷಕರು ಆತನ ವಿದ್ಯಾರ್ಥಿಗಳ ಮುಂದೆ ಒಂದು ಕಂಬಳಿಹುಳುವನ್ನು(caterpillar) ಇಡುತ್ತಾರೆ. ಅದು ಚಿಟ್ಟೆಯಾಗಲು ತಯಾರಿರುತ್ತದೆ. ಅವರು, "ಇದನ್ನು ಯಾರು ಮುಟ್ಟಬೇಡಿ" ಎಂದು ಹೇಳಿ ಸ್ವಲ್ಪ ಸಮಯ ಹೊರಗೆ ಹೋಗುತ್ತಾರೆ. ವಿದ್ಯಾರ್ಥಿಗಳು ಕಂಬಳಿಹುಳು ಅದರ ಚರ್ಮವನ್ನು ಮುರಿಯಲು ಪಡುತ್ತಿರುವ ಕಷ್ಟವನ್ನು ನೋಡುತ್ತಾರೆ. ಒಬ್ಬ ವಿದ್ಯಾರ್ಥಿ ಇದನ್ನು ಸಹಿಸದೆ ಕಂಬಳಿಹುಳುವಿನ ಚರ್ಮವನ್ನು ಮುರಿದನು. ಆಗ ಶಿಕ್ಷಕರು ವಾಪಸ್ ಬಂದು, "ಇನ್ನು ಈ ಚಿಟ್ಟೆಯು ಜೀವನಪೂರ್ತಿ ಹಾರಲು ಸಾಧ್ಯವಿಲ್ಲ" ಎನ್ನುತ್ತಾರೆ. ಏಕೆಂದರೆ ಅದು ಸ್ವಯಂ ಆಗಿ ತನ್ನ ರೆಕ್ಕೆಯನ್ನು ಗಟ್ಟಿ ಮಾಡಿಕೊಳ್ಳಲಿಲ್ಲ.
ಕಥೆಯ ನೀತಿ ಏನೆಂದರೆ, ನಮ್ಮ ಪೋಷಕರು ಆ ವಿದ್ಯಾರ್ಥಿಯ ರೀತಿ ಇರುತ್ತಾರೆ. ಮಕ್ಕಳಿಗೆ ಸುರಕ್ಷಿತ ಮತ್ತು ಸುಭದ್ರ(safe and secure) ಪರಿಸರವನ್ನು ಸೃಷ್ಟಿ ಮಾಡಲು ಯೋಚಿಸುತ್ತಾರೆ. ಆದರೆ ಸೌಕರ್ಯ ವಲಯ(comfort zone) ದೊಡ್ಡ ಶತ್ರುವಾಗಿದ್ದು, ಹೊಸದನ್ನು ಪ್ರಯತ್ನಿಸುವುದರಿಂದ ತಡೆಯುತ್ತದೆ. ನೀವು ನಿಮ್ಮ ಪೋಷಕರಿಗೆ ನೋಯಿಸದೆ ನಿಜವಾದ ಸಂಭಾವ್ಯವನ್ನು(potential) ಸಾಧಿಸಲು ಪ್ರಯತ್ನಿಸಬೇಕು. ನೀವು ಏನೇ ಮಾಡಿದರೂ ಅದರ ಫಲಿತಾಂಶವನ್ನು ಅವರಿಗೆ ತೋರಿಸಿ. ನಿಮ್ಮ ಉತ್ಸಾಹದಿಂದ(passion) ಹಣ ಗಳಿಸಿ ತೋರಿಸಿ.
ಇದನ್ನು ಓದಿ: ನಿಮ್ಮ ಸುತ್ತಲಿರುವ ಪ್ರತಿಯೊಬ್ಬರೂ ಏಕೆ ಹೆಚ್ಚು ಶ್ರೀಮಂತರಾಗಿ ಕಾಣುತ್ತಾರೆ?ಪೋಷಕರ ನಂತರ ಬರುವುದೇ ಸಂಬಂಧಿಕರು, ಇವರುಗಳ ಸ್ಥಳೀಯ ನರಿಗಳಲ್ಲೇ ಅಧಿಕ ಅಪಾಯಕಾರಿಯಾಗಿದ್ದಾರೆ. ಎಲ್ಲಾ ಸಂಬಂಧಿಕರು ಒಳಗಿನಿಂದ ಸ್ವಲ್ಪವಾದರೂ ಅಸೂಯೆ(jeolous) ಹೊಂದಿರುತ್ತಾರೆ. ಅವರಿಗೆ ಅವರ ಮಕ್ಕಳು ಉತ್ತಮ ಮತ್ತು ಇತರರು ಅವರ ಪಟ್ಟಿಯಲ್ಲೂ ಇರುವುದಿಲ್ಲ. ನೀವು ಸರಾಸರಿಗಿಂತ ಸ್ವಲ್ಪ ಹೆಚ್ಚಿದ್ದರೆ ಅವರು ನಿಮ್ಮನ್ನು ನೀಚನಾಗಿ ತೋರಿಸಲು ಯಾವುದೇ ಕಾರಣ ಬಿಡುವುದಿಲ್ಲ. ಇವರು ವಿರಾಮವನ್ನು ನೀಡುತ್ತ ಏಕೆಂದರೆ ಎಂಬ(power of because using pause) ತಂತ್ರವನ್ನು ಬಳಸುತ್ತಾರೆ. ಇದರಲ್ಲಿ ಇವರುಗಳು ತಾರ್ಕಿಕ(logical) ಮಾತನ್ನು ಪ್ರಾರಂಭಿಸಿ, ಅದರಲ್ಲಿ ಏಕೆಂದರೆ(because) ಸೇರಿಸಿ, ಮಧ್ಯದಲ್ಲಿ ವಿರಾಮ(pause) ನೀಡುತ್ತಾರೆ. ಇದರಿಂದ ಮುಂದಿರುವವನು ಅವರನ್ನು ನಂಬಲು ಪ್ರಾರಂಭಿಸುತ್ತಾನೆ. ಅಂತರ್ಜಾಲ ಬಂದ ನಂತರ ಇವರ ಶಕ್ತಿ ಕೂಡ ಹೆಚ್ಚಿದೆ. ಇವರುಗಳು ಇಂದಿನ ಯುವಕರು ತರ್ಕ ಮತ್ತು ಶಾಂತಯುತ(logic and calmness) ರೀತಿಯ ಮಾತುಗಳನ್ನು ಕೇಳಲು ಇಷ್ಟಪಡುತ್ತಾರೆ ಎಂಬುದನ್ನು ತಿಳಿದಿದ್ದಾರೆ. ಅದನ್ನೇ ಬಳಸಿಕೊಂಡು ಇವರುಗಳು ಅವರನ್ನು ಗುರಿಯಿಂದ ಬೇರೆಡೆ ಸೆಳೆಯಲು ಬಳಸುತ್ತಾರೆ.
ಉದಾಹರಣೆಗೆ, "ಮಗು, ಬಿಟೆಕ್ ಮಾಡಬೇಕು. ಏಕೆಂದರೆ ಇಂಜಿನಿಯರ್ ಒಳ್ಳೆಯ ಹಣ ಗಳಿಸುತ್ತಾನೆ", ನಂತರ ವಿರಾಮ ನೀಡಿ, "ಸ್ಥಿರ ಜೀವನವನ್ನು(stable life) ಜೀವಿಸುತ್ತಾನೆ" ಎನ್ನುತ್ತಾರೆ. ಇದನ್ನು ಕೇಳಿ ಮಕ್ಕಳು ಇಂಜಿನಿಯರಿಂಗ್ ಮಾಡುತ್ತಾರೆ ಮತ್ತು ನಂತರ ಕಾರ್ಪೊರೇಟ್ ಉದ್ಯೋಗದಲ್ಲಿ ದಿನದ 9 ರಿಂದ 12 ಗಂಟೆ ಕೆಲಸ ಮಾಡಬೇಕು. ಹಣವು ಅಷ್ಟು ಸಿಗುವುದಿಲ್ಲ, ಆರಾಮಾಗಿದರೆ ಅದುವೇ ದೊಡ್ಡದಾಗಿದೆ. ಈ ರೀತಿಯಾಗಿ ಸಂಬಂಧಿ ನರಿಗಳು ಆ ಮಗುವಿನ ಜೀವನವನ್ನು(career) ನಾಶ ಮಾಡಿದರು.
ಹಾಗಿದ್ದರೆ ಯಾರ ಮಾತನ್ನು ಕೇಳಬೇಕು?
ಇದರ ಉತ್ತರ ಕೇವಲ ಅನುಭವ ಇರುವ ಆ ಕ್ಷೇತ್ರದಲ್ಲಿ ಏನಾದರೂ ಸಾಧಿಸಿದ ಸಂಬಂಧಿಕರ ಮಾತನ್ನು ಕೇಳಿ. "ಕತ್ತೆ ತನ್ನ ಅನುಭವದಿಂದ ಕಲಿಯುವುದಿಲ್ಲ, ವ್ಯಕ್ತಿಯು ತನ್ನ ಅನುಭವದಿಂದ ಕಲಿಯುತ್ತಾನೆ ಮತ್ತು ಅತೀ ಬುದ್ಧಿವಂತ ವ್ಯಕ್ತಿಯು ಇತರರ ಅನುಭವದಿಂದ ಕಲಿಯುತ್ತಾನೆ" ಎಂದು ಚಾಣಕ್ಯ ಹೇಳಿದ್ದಾರೆ.
ಅನುಭವ ಒಂದು ಶಿಕ್ಷಕನ ರೀತಿಯಾಗಿದೆ. ಅದನ್ನು ನಮ್ಮ ತಪ್ಪುಗಳಿಂದ ಕಲಿಯಬೇಕೆಂದಿಲ್ಲ. ನಿಮ್ಮ ತಪ್ಪುಗಳಿಂದಲೇ ಕಲಿಯುತ್ತಿದ್ದರೆ, ಜೀವನವೇ ಅಲ್ಪವೆನ್ನಿಸುತ್ತದೆ. ಇತರರ ಅನುಭವದಿಂದ ಕಲಿತರೆ ಜೀವನ ತುಂಬಾನೇ ಸುಲಭವಾಗುತ್ತದೆ. ವ್ಯಕ್ತಿ ಇಲ್ಲ ಇತರರ ಅನುಭವ ನೀವು ನಿರ್ಧಾರ ಮಾಡಿ.
ಇದನ್ನು ಓದಿ: ಯಾರೂ ನಿಮಗೆ ಹೇಳದ 10 ಶ್ರೀಮಂತ ಸತ್ಯಗಳುಇನ್ನೂ 3ನೇ ಸ್ಥಳೀಯ ನರಿಗಳು ಮನೆಯ ಹೊರಗೆ ಮೊದಲಿಗೆ ಸಿಗುವ ಗೆಳೆಯರು ಆಗಿದ್ದಾರೆ. ಇಲ್ಲಿ ನಾವು ನಿಜವಾದ ಗೆಳೆಯರ ಬಗ್ಗೆ ಮಾತನಾಡುತ್ತಿಲ್ಲ, ಬದಲಿಗೆ ಸ್ವಾರ್ಥಿ ಗೆಳೆಯರ(selfish friends) ಬಗ್ಗೆ ಮಾತನಾಡುತ್ತಿದ್ದೇವೆ. ಇವರುಗಳು ನಿಮ್ಮ ಗೆಳೆತನ ಬಳಸಿಕೊಂಡು ಲಾಭ ಪಡೆದು ಕುಶಲತೆಯಿಂದ ಬಳಸಿಕೊಳ್ಳುತ್ತಾರೆ(manipulate). ಸ್ವಾರ್ಥಿ ಗೆಳೆಯರು 2 ರೀತಿಯ ನಿಗೂಢ ಕೈಚಳಕ ತಂತ್ರವನ್ನು ಬಳಸುತ್ತಾರೆ.
ಅಂದರೆ ಏನು ಮಾಡುವೆಯೊ ಆ ರೀತಿಯೇ ತೀರಿಸುವೆ(as you sow, so shall you reap), ನೀವು ಬಿತ್ತಿದಂತೆ ನೀವು ಕೊಯ್ಯುವಿರಿ. ಆರೋಗ್ಯಕರ ಗೆಳೆತನದಲ್ಲಿ ಇದು ಸಾಮಾನ್ಯವಾಗಿದೆ. ಆದರೆ ಸ್ವಾರ್ಥಿ ಸ್ನೇಹಿತರಲ್ಲಿ ಇದನ್ನು ಬಲವಂತವಾಗಿ ಮಾಡಿಸಲಾಗುತ್ತದೆ. ಉದಾಹರಣೆಗೆ, ಅವರಿಗೆ ನಿಮ್ಮಿಂದ ಏನಾದರೂ ಸಹಾಯ ಬೇಕಿದ್ದಾಗ ಈ ರೀತಿ ಹೇಳುತ್ತಾರೆ, "ನಾನು ನಿನ್ನಗಾಗಿ ಏನೇನು ಮಾಡಿರುವೆ ನೆನಪಿಲ್ಲವೇ, ನೀನು ನನ್ನಗಾಗಿ ಇಷ್ಟನ್ನು ಮಾಡಲು ಸಾಧ್ಯವಿಲ್ಲವೇ" ಎಂದು ಹೇಳುತ್ತಾರೆ. ಇದರಿಂದ ನೀವು ಅವರ ಮಾತನ್ನು ಒಪ್ಪುತ್ತೀರಾ. ಆದರೆ ನಿಜವಾದ ಗೆಳೆಯನು ನಿಮ್ಮನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ. ಆತ ನಿಮಗೆ ತಪ್ಪಿತ(guilt) ಅನುಭವ ಮಾಡದೆ ಪರಸ್ಪರ ಗೌರವದಿಂದ(mutual respect) ಮಾತನಾಡುತ್ತಾನೆ.
ವಿಷಕಾರಿ ಗೆಳೆಯರು ಅಪಾಯಕಾರಿ ತಂತ್ರವನ್ನು ಬಳಸುತ್ತಾರೆ ಅದೆಂದರೆ, "i like you because you are like me". ಅಂದರೆ ಅವರು ಏನು ಮಾಡುತ್ತಾರೋ ಅದುವೇ ಗುರಿಯಾಗಿದೆ ಮತ್ತು ನೀವು ಅದನ್ನೇ ಮಾಡಬೇಕು. ಅದು ಕೆಟ್ಟ ಅಭ್ಯಾಸವಾಗಿದ್ದರೂ ಸರಿಯೇ! ಅಂದರೆ ಮದ್ಯ ಕುಡಿಯುವುದು, ಸಿಗರೇಟ್ ಸೇದುವುದು, ಇಲ್ಲ ತಪ್ಪು ನಿರ್ಧಾರ ತೆಗೆದುಕೊಳ್ಳುವುದು ಇತ್ಯಾದಿ. ಇದರಿಂದ ನೀವು ಅವರ ಅನುಮೋದನೆ(approval) ತೆಗೆದುಕೊಳ್ಳುವುದರಲ್ಲೇ ಜೀವನ ನಾಶ ಮಾಡಿಕೊಳ್ಳುತ್ತೀರಾ.
ಯಾವುದಾದರೂ ಸ್ವಾರ್ಥಿ ಸ್ನೇಹಿತ, ಸಾಮಾಜಿಕ ಪುರಾವೆ ತೋರಿಸಿ ನಿಮ್ಮಿಂದ ಕೆಟ್ಟದ್ದನ್ನು ಮಾಡಿಸಲು ಪ್ರಯತ್ನಿಸಿದರೆ, ಈ ಮಾತು ಹೇಳಿ. ಇದರ ನಂತರ ಅವನು ನಿಮ್ಮ ವಿಷಯಕ್ಕೆ ತಲೆ ಹಾಕುವುದಿಲ್ಲ. "ಸಿಂಹ ಒಂಟಿಯಾಗಿ ನಡೆಯದಾಡುವಷ್ಟು ಶಕ್ತಿಯನ್ನು ಹೊಂದಿದೆ, ಗುಂಪಿನಲ್ಲಿ ನರಿಗಳು ಮಾತ್ರ ಇರುತ್ತವೆ" ಎಂದು ಹೇಳಿ.
ಇವರುಗಳು "foot in the door" ನಿಗೂಢ ಕೈಚಳಕ ತಂತ್ರವನ್ನು ಬಳಸುತ್ತಾರೆ. ಇದರ ಅರ್ಥ ಮೊದಲಿಗೆ ಚಿಕ್ಕ ವಿನಂತಿ ಮಾಡಿ ನಂತರ ದೊಡ್ಡ ವಿನಂತಿ ಮಾಡುವುದು. ಸ್ಥಿರತೆ(consistency) ಕಾಪಾಡಿಕೊಳ್ಳಲು ಜನರು ವಿನಂತಿಗಳನ್ನು ಸ್ವೀಕರಿಸುತ್ತಾರೆ ಮತ್ತು ದೊಡ್ಡ ಸಮಸ್ಯೆಯಲ್ಲಿ ಸಿಲುಕುತ್ತಾರೆ. ಅಪರಿಚಿತರು ನಿಮ್ಮನ್ನು ಗಮನಿಸುತ್ತಿರುತ್ತಾರೆ ಮತ್ತು ಒಂದು ಸಮಯದ ನಂತರ ನಿಮ್ಮ ಹತ್ತಿರ ಬಂದು ನಿಮ್ಮ ರೀತಿಯ ವರ್ತನೆ ತೋರಿಸುತ್ತಾರೆ. ಇದರಿಂದ ಅವರು ನಿಮ್ಮ ರೀತಿಯೇ ಎಂದು ಅನಿಸುತ್ತದೆ ಮತ್ತು ನೀವು ಅವರ ಚಿಕ್ಕ ಅಥವಾ ದೊಡ್ಡ ಮಾತುಗಳನ್ನು ಕೇಳುತ್ತೀರಾ. ಮನೋವಿಜ್ಞಾನದ ಪ್ರಕಾರ, ನಮ್ಮ ರೀತಿ ಇರುವವರನ್ನು ನಾವು ಇಷ್ಟಪಡುತ್ತೇವೆ. ಅಂದರೆ, "i like you because you are like me". ಯಾವುದೇ ಅಪರಿಚಿತ ನಿಮ್ಮ ಜೊತೆ ಅಧಿಕ ಆತ್ಮೀಯತೆಯಿಂದಿದ್ದರೆ, ಇದು ಒಂದು ಎಚ್ಚರಿಕೆ ಚಿಹ್ನೆಯಾಗಿರುತ್ತದೆ. ಈ ರೀತಿಯ ಜನಗಳಿಂದ ಎಷ್ಟು ಬೇಗನೆ ದೂರವಾಗಲು ಸಾಧ್ಯವೋ ಒಳ್ಳೆಯದು.
ಇದನ್ನು ಓದಿ: ಬದುಕಿನಲ್ಲಿ ನಿಶ್ಚಲತೆಯನ್ನು ಸಾಧಿಸುವುದು ಹೇಗೆ?ನಿಮ್ಮ ಮನೆಯಲ್ಲಿ ಯಾವುದಾದರು ಆಚರಣೆಯಾದರೆ ಮೊದಲಿಗೆ ನೆರೆಹೊರೆಯವರು ಬರುತ್ತಾರೆ. ಇವರುಗಳು ನಿಗೂಢ ಕೈಚಳಕ ತಂತ್ರವಾದ "go slightly wrong" ಅನ್ನು ಬಳಸುತ್ತಾರೆ. ನಿಮ್ಮ ಹೊಸ ಉದ್ಯೋಗವಾಗಿದೆ, ಇದರ ಖುಷಿಗೆ ನಿಮ್ಮ ಪೋಷಕರು ಒಂದು ಪಾರ್ಟಿ ಇಡುತ್ತಾರೆ ಎಂದುಕೊಳ್ಳಿ. ಇದರಲ್ಲಿ ನಿಮ್ಮ ನೆರೆಹೊರೆಯವರು ಬರುತ್ತಾರೆ. "ಉದ್ಯೋಗ ಎಲ್ಲಿಯಾಗಿದೆ, ವಿದೇಶದಲ್ಲ". ಪೋಷಕರು, "ಇಲ್ಲ ಭಾರತದಲ್ಲಿ ಆಗಿದೆ" ಎಂದು ಹೇಳುತ್ತಾರೆ. ನೆರೆಹೊರೆಯವರು, "ಬೆಂಗಳೂರಿನಲ್ಲ" ಎಂದು ಕೇಳುತ್ತಾರೆ. ಪೋಷಕರು, "ಇಲ್ಲ ದೆಹಲಿಯಲ್ಲಿ" ಎನ್ನುತ್ತಾರೆ. ನೆರೆಹೊರೆಯವರು ಆಗ, "ದೊಡ್ಡ ಕಂಪನಿ ಇರಬೇಕು" ಎನ್ನುತ್ತಾರೆ. ಆಗ ಪೋಷಕರು, "ಇಲ್ಲ ಅದು ಸ್ಟಾರ್ಟ್ ಅಪ್ ಆಗಿದೆ" ಎನ್ನುತ್ತಾರೆ. ಆಗ ನೆರೆಹೊರೆಯವರು, "ಒಹ್ ಸ್ಟಾರ್ಟ್ ಅಪ್... ಸರಿ" ಎನ್ನುತ್ತಾರೆ.
ಇದರಲ್ಲಿ ನೆರೆಹೊರೆಯವರು ಸ್ವಲ್ಪ ಸ್ವಲ್ಪ ತಪ್ಪು ಹೇಳಿ ಪೂರ್ತಿ ಸತ್ಯವನ್ನು ತಿಳಿದುಕೊಂಡರು ಮತ್ತು ಪೋಷಕರನ್ನು ಕೆಳಮಟ್ಟ ಮಾಡಿದರು. ಅವರ ನಿಜವಾದ ಗುರಿ ನಿಮ್ಮ ಸ್ಥಿತಿಯನ್ನು ತೋರಿಸುವುದಾಗಿರುತ್ತದೆ. ಏಕೆಂದರೆ ಜಗತ್ತಿನಲ್ಲಿ ಜನರು ನಿಮಗೆ ಗೌರವವನ್ನು ಸ್ಥಿತಿಯ(status) ಮೇಲೆ ನೀಡುತ್ತಾರೆ. ಹುಡುಗಿಯು ಅವಳ ವಯಸ್ಸು ಮತ್ತು ಹುಡುಗ ಆತನ ಸಂಬಳದ ಬಗ್ಗೆ ಯಾರಿಗೂ ತಿಳಿಸಬಾರದು ಎಂದು ಯಾರೋ ಸರಿಯಾಗಿ ಹೇಳಿದ್ದಾರೆ.
ವಿಷಕಾರಿ ಸಂಗಾತಿಗಳು "love bombing", ರೀತಿಯ ಅಪಾಯಕಾರಿ ನಿಗೂಢ ಕೈಚಳಕ ತಂತ್ರವನ್ನು ಬಳಸುತ್ತಾರೆ. ಪ್ರಾರಂಭದಲ್ಲಿ ಅತಿಯಾಗಿ ಪ್ರೀತಿಯನ್ನು ತೋರಿಸುತ್ತಾರೆ. ನೀವು ಅವರ ಬಲೆಯಲ್ಲಿ ಸಿಕ್ಕಿಕೊಂಡಾಗ, ಅವರು ಎಲ್ಲ ವಿಷಯಕ್ಕೂ ನಿಮಗೆ ತುಂಬಾ ಕಾಡಿಸಲು ಶುರು ಮಾಡುತ್ತಾರೆ. ಉಡುಗೊರೆ ಕೊಡುವುದಿಲ್ಲ, ಪ್ರೀತಿಸುವುದಿಲ್ಲ ಮತ್ತು ಗಮನವನ್ನು ಕೂಡ ನೀಡುವುದಿಲ್ಲ. ನೀವು ಪೂರ್ತಿಯಾಗಿ ಅವರ ಗಮನಕ್ಕಾಗಿ ಹಂಬಲಿಸುತ್ತೀರಾ. ಈ ವಿಷಕಾರಿ ಸಂಗಾತಿಗಳು, "sunk cost fallacy" ಅನ್ನು ಚೆನ್ನಾಗಿ ಅರ್ಥಮಾಡಿಕೊಂಡಿರುತ್ತಾರೆ. ಇದರ ಪ್ರಕಾರ ಮನುಷ್ಯನು ತನ್ನ ಶ್ರಮ ಮತ್ತು ಸಮಯವನ್ನು ಹಾಕಿದ ವಿಷಯವನ್ನು ಬಿಡಲು ತುಂಬಾ ಕಷ್ಟವಾಗಿದೆ.
ಉದಾಹರಣೆಗೆ ಸ್ಥಾಪಕ(founder) ಸ್ಟಾರ್ಟ್ ಅಪ್ ಉಳಿಸಲು ಎಲ್ಲವನ್ನು ಮಾರುತ್ತಾನೆ. ಒಬ್ಬ ಹೂಡಿಕೆದಾರ ಸ್ಟಾಕ್ ಎಷ್ಟೇ ಬಿದ್ದರೂ ಅದನ್ನು ಮಾರುವುದಿಲ್ಲ. ಯಾರಾದರೂ ಬೇಸರದ ಸಿನಿಮಾ ನೋಡಲು ಹೋದರೆ ಮಧ್ಯದಲ್ಲಿ ಎದ್ದು ಬರುವುದಿಲ್ಲ. ಆದರೆ 10 ರಲ್ಲಿ ಒಬ್ಬ ಧೈರ್ಯ ತೋರಿಸಿ, ಈ ತಪ್ಪು ಕಲ್ಪನೆಯನ್ನು ಮುರಿದು ಬದುಕಿನಲ್ಲಿ ಮುನ್ನುಗುವ ತೀರ್ಮಾನ ತೆಗೆದುಕೊಳ್ಳುತ್ತಾನೆ. ಆದರೆ ವಿಷಕಾರಿ ಪ್ರೇಮಿಯು(toxic lover) ತುಂಬಾ ಚತುರವಿರುತ್ತಾರೆ. ನೀವು ತೊರೆಯಲು ತಯಾರಿರುವಿರಾ ಎಂಬುದು ತಿಳಿದ ತಕ್ಷಣವೇ ಲವ್ ಬಾಂಬ್ ದಾಳಿ ಮಾಡುತ್ತಾರೆ ಮತ್ತು ನಿಮ್ಮನ್ನು ಗೊಂದಲಗೊಳಿಸಿ, ಮತ್ತೆ ಟ್ರ್ಯಾಕ್ನಲ್ಲಿ ಸಿಲುಕಿಸುತ್ತಾರೆ. ಹೀಗಾಗಿ ಯಾರಾದರೂ ಉಚಿತವಾಗಿ ಪ್ರೀತಿಸುತ್ತಿದ್ದರೆ ಅವರಿಂದ ಹುಷಾರಾಗಿರಿ, ಇಲ್ಲ ಅವರು ನಿಮ್ಮ ಜೀವನವನ್ನೇ ಹಾಳು ಮಾಡಿಬಿಡುತ್ತಾರೆ.
ಇಲ್ಲಿಯ ತನಕ ನಿಮ್ಮ ಜೀವನವನ್ನು ಹಾಳು ಮಾಡುವ ಸ್ಥಳೀಯ ನರಿಗಳು ಮತ್ತು ಅವರ ನಿಗೂಢ ಕೈಚಳಕ ತಂತ್ರಗಳ ಬಗ್ಗೆ ತಿಳಿದುಕೊಂಡಿರಿ. ಆದರೆ ಮುಂದೆ ತಿಳಿಸುವ ನರಿಗಳು ನಿಮ್ಮನ್ನು ಅಷ್ಟೇ ಅಲ್ಲದೆ ನಿಮ್ಮ ಪರಿವಾರವನ್ನು ಹಾಳು ಮಾಡಬಹುದು.
ಇದನ್ನು ಓದಿ: ಬದುಕನ್ನು ಬದಲಾಹಿಸುವ 12 ನಿಯಮಗಳು[BRAIN RULES]ಬಾಯಿಮಾತಿನ ನರಿಗಳಲ್ಲಿ ಮೊದಲಿಗೆ ಬರುವುದು ನಿರ್ಮಾತೃ ಆಗಿದ್ದಾರೆ. ಎಲ್ಲಾ ನಿರ್ಮಾತೃ ಕೆಟ್ಟವರಲ್ಲ, ಆದರೆ ಕೆಲವರು ಸೃಜನಶೀಲ ಇರುವ ಜೊತೆಗೆ ಕುತಂತ್ರರು ಕೂಡ ಇರುತ್ತಾರೆ. ಈ ರೀತಿಯ ನಿರ್ಮಾತೃಗಳು ಮೊದಲಿಗೆ ವಿಶ್ವಾಸಾರ್ಹಯಿರುತ್ತಾರೆ(authenticate). ಆದರೆ ಯಶಸ್ಸಿನ ರುಚಿ ಸಿಕ್ಕಿದಷ್ಟು ಭ್ರಷ್ಟ(corrupt) ಆಗುತ್ತಾರೆ. ಇವರುಗಳು ತಮ್ಮ ಪ್ರೇಕ್ಷಕರಿಗೆ ಕೆಟ್ಟ ವಿಷಯಗಳು, ಉದಾಹರಣೆಗೆ ಜೂಜಾಟದ ಅಪ್ಲಿಕೇಶನ್ಗಳನ್ನು(gambling apps) ಬಳಸಲು ಭಯವನ್ನು ಸೃಷ್ಟಿ ಮಾಡುತ್ತಾರೆ. ಇವರುಗಳ ಮಾತನ್ನು ಕೇಳಿ ಪ್ರೇಕ್ಷಕರು ಅವರ ಸಮಯ, ಶಕ್ತಿ ಮತ್ತು ಹಣವನ್ನು ವ್ಯರ್ಥ ಮಾಡುತ್ತಾರೆ. ಇದರಲ್ಲಿ ಅಧಿಕ ಹದಿಹರೆಯದವರು(teenager) ಸಿಕ್ಕಿಕೊಳ್ಳುತ್ತಾರೆ ಮತ್ತು ಅವರಷ್ಟೇ ಅಲ್ಲದೆ ಅವರ ಕುಟುಂಬದವರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ವ್ಯರ್ಥ ಮಾಡುತ್ತಾರೆ. ಈ ರೀತಿಯ ನಿರ್ಮಾತೃಗಳು ನಿಮ್ಮ ನಿಜವಾದ ಶತ್ರುಗಳಾಗಿದ್ದಾರೆ. ಆದರೆ ಇವರಿಗಿಂತ ತುಂಬಾ ಅಪಾಯಕಾರಿ ಇರುವ ನಿರ್ಮಾತೃವೆಂದರೆ ಮೇಲಿನಿಂದ ಗೆಳೆಯನ ರೀತಿ ಕಂಡರು, ಒಳಗಿನಿಂದ ವೈರಿಗಳಾಗಿರುತ್ತಾರೆ. ಈ ರೀತಿಯ ನಿರ್ಮಾತೃಗಳು ದೃಢೀಕರಣ ಪಕ್ಷಪಾತ(confirmation bias) ತಂತ್ರವನ್ನು ಚೆನ್ನಾಗಿ ಬಳಸಿಕೊಳ್ಳುತ್ತಾರೆ.
ಇದರ ಪ್ರಕಾರ ಮನುಷ್ಯನು ಅವನ ಚಿಂತನೆಯ ಪ್ರಕ್ರಿಯೆ(thought process) ರೀತಿಯ ವಸ್ತುಗಳ ಮೇಲೆ ಆಕರ್ಷಿತನಾಗುತ್ತಾನೆ. ಉದಾಹರಣೆಗೆ ಒಬ್ಬನಿಗೆ ದೋಸೆ ಇಷ್ಟವಿರುತ್ತದೆ. ನೀವು ಆತನಿಗೆ ಹೋಟೆಲ್ ಮೆನು ತೋರಿಸಿದರೆ ಆತ ಮೊದಲಿಗೆ ದೋಸೆಯನ್ನು ಹುಡುಕುತ್ತಾನೆ. ಇದೇ ಮನಸ್ಸಿನ ಬಲೆಯನ್ನು(mindtrap) ಬಳಸಿಕೊಂಡು ನಿರ್ಮಾತೃಗಳು ನೀವು ಬಯಸಿರುವುದನ್ನೇ ತೋರಿಸುತ್ತಾರೆ. ನಿರ್ಮಾತೃಗಳು ಅಷ್ಟೇ ಅಲ್ಲದೆ ಸಾಮಾಜಿಕ ಮಾಧ್ಯಮಗಳು, ಈ ತಂತ್ರವನ್ನು ಬಳಸುತ್ತವೆ. ಇದರಲ್ಲಿ ನಿರ್ಮಾತೃವಿಗೆ ಏನು ನಷ್ಟವಾಗುವುದಿಲ್ಲ, ಆದರೆ ನಿಮ್ಮ ಬದುಕು ನಾಶವಾಗುತ್ತದೆ. ಈ ರೀತಿಯ ನಿರೂಪಣೆಯನ್ನು ಪದೇ ಪದೇ ಕೇಳುವುದರಿಂದ ನಿಮ್ಮ ದೃಷ್ಟಿಕೋನ ಚಿಕ್ಕದಾಗುತ್ತದೆ ಮತ್ತು ನೀವು ಇನ್ನೊಂದು ಕಡೆಯ ಮಾತನ್ನು ಕೇಳದೆ ನಿರ್ಲಕ್ಷಿಸುತ್ತೀರಾ.
ಈ ರೀತಿಯ ನಿರ್ಮಾತೃವಿನಿಂದ ಉಳಿದುಕೊಳ್ಳಲು ನೀವು ಈ ಮಾತನ್ನು ನೆನಪಿಡಿ, "you lose, leave them alone. you win, keep them forever", ಅಂದರೆ ನಿಮ್ಮ ಬದುಕಿನಲ್ಲಿ ಗೆಲ್ಲಲು ಸಹಕರಿಸುವ, ಹೊಸದನ್ನು ಕಲಿಸುವ ನಿರ್ಮಾತೃಗಳನ್ನು ಫಾಲೋ ಮಾಡಿ. ಅದು ಬಿಟ್ಟು ಮೋಸ ಮಾಡುವವರನ್ನಲ್ಲ.
ಯಾರ ಮೇಲಾದರೂ ನಂಬಿಕೆ ಇಡುವ ಮೊದಲು ಎಲ್ಲರ ಕಾರ್ಯಸೂಚಿ(agenda) ಇರುತ್ತದೆ ಎಂಬುದನ್ನು ತಿಳಿಯಿರಿ ಮತ್ತು ಸತ್ಯ ಕಪ್ಪು(black) ಮತ್ತು ಬಿಳಿ(white) ಇರುವುದಿಲ್ಲ. ಆದರೆ ಅದು ಬೂದು ಪ್ರದೇಶದಲ್ಲಿ(gray region) ಇರಬಹುದು.
ಇದನ್ನು ಓದಿ: 21 ದಿನಗಳಲ್ಲಿ ಎಲ್ಲರನ್ನು ಹಿಂದೆ ತನ್ನಿ(monk mode)ಬಾಯಿಮಾತಿನ ನರಿಗಳಲ್ಲಿ 2 ನೇ ಯದಾಗಿ ಬರುವವರು ಸೆಲೆಬ್ರಿಟಿ. ಭಾರತದಲ್ಲಿ 2 ವಿಷಯಗಳು ಪ್ರಸಿದ್ಧವಿವೆ, ಅವೆಂದರೆ ಕ್ರಿಕೆಟ್ ಮತ್ತು ಸಿನಿಮಾ. ಭಾರತದಲ್ಲಿ ಜನರು ಕ್ರಿಕೆಟರ್ ಮತ್ತು ಸಿನಿಮಾ ನಟರನ್ನು ದೇವರೆಂದುಕೊಳ್ಳುತ್ತಾರೆ. ಇದೇ ರೀತಿ ಮುಂದಿರುವ ವ್ಯಕ್ತಿಯನ್ನು ದೇವರನ್ನಾಗಿ ಮಾಡುವುದನ್ನು ಹಾಲೋ ಪರಿಣಾಮ(halo effect) ಎನ್ನುತ್ತೇವೆ. ಅಂದರೆ ನೀವು ಸೆಲೆಬ್ರೆಟಿಗಳನ್ನು ಕಣ್ಣು ಮುಚ್ಚಿಕೊಂಡು ಫಾಲೋ ಮಾಡುತ್ತೀರಾ. ಇದೇ ಪರಿಣಾಮದ ಲಾಭ ಪಡೆದುಕೊಂಡು ಈ ಕ್ರಿಕೆಟರ್ ಜೂಜಾಟ ಅಪ್ಲಿಕೇಶನ್ಗಳನ್ನು ಪ್ರಚಾರ ಮಾಡುತ್ತಾರೆ ಮತ್ತು ಸಿನಿಮಾ ನಾಯಕರು ಪಾನ್(pan) ಜಾಹೀರಾತು ಮಾಡುತ್ತಾರೆ. ಇದರಲ್ಲಿ ನಟಿಯರು ದೂರವಿಲ್ಲ. ಅನೇಕ ನಟಿಯರು ಅವರು ಎಂದಿಗೂ ಬಳಸದ ಅಪಾಯಕಾರಿ ವಸ್ತುಗಳನ್ನು ಬಳಸುತ್ತಾರೆ. ಈ ರೀತಿ ಜಾಹೀರಾತುನಿಂದಲೇ ಅನುಯಾಯಿಗಳು ಅವರ ಮತ್ತು ಅವರ ಕುಟುಂಬದ ಬದುಕನ್ನು ಹಾಳು ಮಾಡುತ್ತಾರೆ.
ಉದಾಹರಣೆಗೆ ಉತ್ತರ ಪ್ರದೇಶದ ಒಬ್ಬ ವ್ಯಕ್ತಿ ತನ್ನ ಸೋದರಸಂಬಂಧಿಯಿಂದ 2.6 ಲಕ್ಷ ತೆಗೆದುಕೊಂಡಿದ. ಆದರೆ ಅವೆಲ್ಲವನ್ನು ಡ್ರೀಮ್ 11 ನಲ್ಲಿ(dream 11) ಹಾಕಿ ಕಳೆದುಕೊಂಡನು. ಇದೇ ರೀತಿ 2020 ರಲ್ಲಿ ರಾಕೇಶ್ ಎಂಬುವನ್ನು ಡ್ರೀಮ್ 11 ನಲ್ಲಿ, 50 ಲಕ್ಷ ಕಳೆದುಕೊಂಡಿದನು. ಇದರಿಂದ ಅವನ ಕುಟುಂಬವೂ ಕೂಡ ನಷ್ಟವನ್ನು ಅನುಭವಿಸುತ್ತಿದೆ. ನಮ್ಮ ಗೆಳೆಯರಲ್ಲಿ ಒಬ್ಬ ನಟರು ಸಿಗರೇಟ್ ಸೇದುವುದನ್ನು ನೋಡಿ ಅವನ್ನು ಪ್ರಾರಂಭಿಸಿದ.
ಬಾಯಿಮಾತಿನ ನರಿಗಳ 3 ನೇ ಸ್ಥಾನದಲ್ಲಿರುವವರು ಕಂಪನಿಯಾಗಿದೆ. ಕಂಪನಿಗಳು ಚೌಕಟ್ಟಿನ ಪರಿಣಾಮವನ್ನು(framing effect) ಬಳಸುತ್ತವೆ. ಇದರಲ್ಲಿ ಸಾರ್ವಜನಿಕರಿಗೆ ಉಪಯುಕ್ತವಿರುವ ವಿಷಯಗಳನ್ನು ಮಾತ್ರ ತೋರಿಸುತ್ತಾರೆ. ಉದಾಹರಣೆಗೆ, ಗ್ಲೋ ಅಂಡ್ ಲವ್ಲೀ(glow and lovely), ಕಪ್ಪು ಚರ್ಮ ಇರುವ ಮಹಿಳೆಯರನ್ನು ದಾಳಿ ಮಾಡುತ್ತದೆ. ಇದರಿಂದ ಅವರು ಅದನ್ನು ಖರೀದಿಸುತ್ತಾರೆ. ಇದೇ ರೀತಿ ಹಲವಾರು ಟೂತ್ಪೇಸ್ಟ್ ನೋವು ಕಡಿಮೆ ಮಾಡುತ್ತದೆ ಎಂದು ಹೇಳುತ್ತವೆ. ಈ ಕಂಪನಿಗಳು ಅವರ ವಸ್ತುಗಳು ಆರೋಗ್ಯಕರ ಎಂದು ತಿಳಿಸಿ, ಜನರ ನಂಬಿಕೆಯನ್ನು ಗಳಿಸಲು ಪ್ರಯತ್ನಿಸುತ್ತವೆ ಮತ್ತು ಇದರಲ್ಲಿ ಯಶಸ್ಸು ಕೂಡ ಪಡೆಯುತ್ತಾರೆ.
ಇವರುಗಳು ತಮ್ಮ ಮಾದರಿಗಳಿಗೆ(modal) ವೈದ್ಯರ(doctor) ಬಟ್ಟೆ ಹಾಕುತ್ತಾರೆ. ಇದರಿಂದ ಗ್ರಾಹಕರಿಗೆ ಇವರ ಹತ್ತಿರ ಒಂದು ಅಧಿಕಾರಿ(authority) ವೈದ್ಯರು ಇದ್ದರೆ ಎಂಬ ನಂಬಿಕೆ ಬರುತ್ತದೆ. ಯಾವ ರೀತಿ ನಿರ್ಮಾತೃ, ಸೆಲೆಬ್ರಿಟಿಗಳು ಮತ್ತು ಕಂಪನಿಗಳು ನಿಮ್ಮ ನಂಬಿಕೆಗೆ ಮೋಸ ಮಾಡುತ್ತಾರೋ ಎಂಬುದನ್ನು ನೋಡಿದಿರಿ. ಆದರೆ ಈ ನರಿಗಳೆಲ್ಲ ಈಗ ನಾವು ತಿಳಿಸುವ ನರಿಗಿಂತ ಚಿಕ್ಕವರೇ. ಏಕೆಂದರೆ ಇವರುಗಳು ನಿಮ್ಮ ಕುಟುಂಬವನ್ನು ಅಷ್ಟೇ ಅಲ್ಲದೆ ಪೂರ್ತಿ ದೇಶವನ್ನು ನಾಶ ಮಾಡುವಷ್ಟು ಶಕ್ತಿಯನ್ನು ಹೊಂದಿದ್ದಾರೆ.
ಇದನ್ನು ಓದಿ: ಯಾರನ್ನಾದರೂ ತಕ್ಷಣವೇ ಓದುವುದು ಹೇಗೆ?ಇದಕ್ಕಾಗಿ ನಾವು ಒಂದು ಕಥೆ ಕೇಳೋಣ. 2 ಬೆಕ್ಕುಗಳಿಗೆ ಒಂದು ರೊಟ್ಟಿ ಸಿಗುತ್ತದೆ. 2 ಬೆಕ್ಕುಗಳು ಅದಕ್ಕಾಗಿ ಕಿತ್ತಾಡುತ್ತಿದ್ದವು. ಕುತಂತ್ರಿ ಕೋತಿಯು ಇವರ ಜಗಳವನ್ನು ನೋಡುತ್ತಿರುತ್ತದೆ ಮತ್ತು ಅವರ ಹತ್ತಿರ ಬಂದು, "ನೀವಿಬ್ಬರೂ ಜಗಳವಾಡಬೇಡಿ, ನಿಮಗೆ ನಾನು ಪರಿಹಾರ ನೀಡುವೆನು" ಎನ್ನುತ್ತದೆ. ಆ ಕೋತಿಯೂ ಆ ರೊಟ್ಟಿಯನ್ನು 2 ಭಾಗ ಮಾಡಿ ತಕ್ಕಡಿಯಲ್ಲಿ ಇಟ್ಟು ತೂಗುತ್ತದೆ. ಒಂದು ಕಡೆ ಅಧಿಕವಿದ್ದ ಕಾರಣ ಕೋತಿ ಅದನ್ನು ತೆಗೆದುಕೊಂಡು ಸ್ವಲ್ಪ ತಿನ್ನುತ್ತದೆ, ನಂತರ ಇನ್ನೊಂದು ಬದಿ ಅಧಿಕವಾಗುತ್ತದೆ, ಅದು ಆ ಬದಿಯದ್ದು ಸ್ವಲ್ಪ ತಿನ್ನುತ್ತದೆ. ಈ ರೀತಿಯಾಗಿ ಕೋತಿಯೂ ಎಲ್ಲಾ ರೊಟ್ಟಿಯನ್ನು ತಿಂದುಬಿಡುತ್ತದೆ ಮತ್ತು ಬೆಕ್ಕುಗಳಿಗೆ ಏನು ಸಿಗುವುದಿಲ್ಲ. ಕೋತಿಯು ಬೇಕಂತಲೇ ಒಂದು ಬದಿಯಲ್ಲಿ ಅಧಿಕ ರೊಟ್ಟಿಯನ್ನು ತುಂಡು ಮಾಡಿತು. ಇದರಿಂದ ಸಮತೋಲನ ಏರುಪೇರಾಗಿ ಅದರ ಲಾಭ ಪಡೆಯಿತು.
ಇದು ಶಾಸ್ತ್ರೀಯ(classic) ವಿಭಜಿಸಿ ಆಳಿ(divide & rule) ನೀತಿಯಾಗಿದೆ. ಇದನ್ನು ಮೊದಲಿಗೆ ಬ್ರಿಟಿಷರು ನಾವು ಭಾರತೀಯರ ಮೇಲೆ ಬಳಸಿದರು. ಇದನ್ನೇ ಬಳಸಿಕೊಂಡು 250 ವರ್ಷ ಭಾರತದಲ್ಲಿ ಆಳ್ವಿಕೆ ನಡೆಸಿದರು ಮತ್ತು $45 ಟ್ರಿಲಿಯನ್ ಕದ್ದುಕೊಂಡು ಹೋದರು. ಅದು ಇಂದಿನ ಯುನೈಟೆಡ್ ಕಿಂಗ್ಡಂನ ವಾರ್ಷಿಕ ಜಿಡಿಪಿಗಿಂತ(gdp) ಶೇಕಡಾ 15 ಪಟ್ಟಾಗಿದೆ. ಇಂದಿಗೂ ಈ ವಿಭಜಿಸಿ ಆಳಿ ತಂತ್ರವೂ ರಾಜಕಾರಣಿಗಳಿಂದ(politician) ಮುಂದುವರೆಯುತ್ತಿದೆ. ಇವರುಗಳಿಂದಲೇ ಭಾರತವೂ ಅನೇಕ ಭಾಗಗಳಾಗಿ ತುಂಡಾಗಿದೆ. ಈ ರಾಜಕಾರಣಿಗಳು ದೇಶವನ್ನು ಪ್ರದೇಶ(region), ಭಾಷೆ(language), ಜಾತಿ(caste), ಅಥವಾ ಧರ್ಮ(religion) ಯಾವುದರಲಾದರು ವಿಂಗಡಿಸಲು ಗಮನ ಹರಿಸುತ್ತಿದ್ದಾರೆ. ಇದು ದೇಶದ ಏಕತೆಯನ್ನು ನಾಶ ಮಾಡುತ್ತಿದೆ.
ವಿಷಯ ತುಂಬಾ ಸುಲಭವಿದೆ, ಬೆಕ್ಕುಗಳಾಗಿ ಕೋತಿಗೆ ನ್ಯಾಯ ಕೇಳಬೇಡಿ, ಪರಸ್ಪರ ಸಮಸ್ಯೆಯನ್ನು ಪರಿಹರಿಸಿ. ಆದರೆ ಎಲ್ಲರನ್ನು ನಾವು ಬದುಕಿನಿಂದ ಹೊರ ಹಾಕಿದರೆ, ಯಾರ ಮೇಲೆ ಭರವಸೆ ಇಡುವುದು ಎಂಬ ಪ್ರೆಶ್ನೆ ಬರುತ್ತದೆ. ಎಲ್ಲರನ್ನೂ ಬದುಕಿನಿಂದ ದೂರ ಮಾಡಲು ಸಾಧ್ಯವಿಲ್ಲ. ಆದರೆ ಅವರುಗಳ ತಂತ್ರವನ್ನು ತಿಳಿಯುವುದು ಮುಖ್ಯವಾಗಿದೆ. ಇದರಿಂದ ನೀವು ಅವರ ಬಲೆಯಲ್ಲಿ ಸಿಲುಕುವುದಿಲ್ಲ. ನಿಮಗೆ ಮೌಲ್ಯ ನೀಡುವವರ ಜೊತೆ ಇರುವಿರಾ.
ಕೊನೆಯದಾಗಿ ಈ ಲೇಖನದಲ್ಲಿ 3 ನರಿಗಳ ಬಗ್ಗೆ ತಿಳಿದುಕೊಂಡಿರಿ. ಇವರುಗಳು ಸರಾಸರಿ ಜನಗಳಾಗಿದ್ದು ತಮ್ಮ ನಿಗೂಢ ಕೈಚಳಕ ತಂತ್ರದಿಂದ ನಿಮ್ಮನ್ನು ನಿಯಂತ್ರಣ ಮಾಡುತ್ತಾರೆ. ಈ ನರಿಗಳು ನಿಮ್ಮ ಸುತ್ತಮುತ್ತಲಿನಿಂದ ಹಿಡಿದು ಸಾವಿರಾರು ಕಿಮೀ ದೂರವಿರುತ್ತಾರೆ. ಸುತ್ತಮುತ್ತ ನಮ್ಮ ಪೋಷಕರು, ಸಂಬಧಿಕರು, ಸ್ವಾರ್ಥಿ ಸ್ನೇಹಿತರು, ನೆರೆಹೊರೆಯವರು, ಅಪರಿಚಿತರು ಮತ್ತು ವಿಷಕಾರಿ ಪಾಲುದಾರರು ಇರುತ್ತಾರೆ.
ದೂರದ ನರಿಗಳ ಬಗ್ಗೆ ತಿಳಿಸಿದರೆ ಅದರಲ್ಲಿ ನಿರ್ಮಾತೃ, ಸೆಲೆಬ್ರೆಟಿಗಳು, ಕಂಪನಿ ಮತ್ತು ತುಂಬಾ ಅಪಾಯಕಾರಿಯಾದ ರಾಜಕಾರಣಿಗಳು ಬರುತ್ತಾರೆ. ಈ ನರಿಗಳು ನಿಮ್ಮನ್ನು ಸರಿ ಸರಿ ಎಂದು ತಪ್ಪು ದಾರಿಯಲ್ಲಿ ಕರೆದುಕೊಂಡು ಹೋಗುತ್ತಾರೆ. ಸರಿಯಾದ ಜನರು ಸರಿಯಾದ ದಿಕ್ಕಿನಲ್ಲಿ ನಿಮ್ಮನ್ನು ಕರೆದುಕೊಂಡು ಹೋಗಿ ಸಿಂಹನ್ನಾಗಿ ಮಾಡುತ್ತಾರೆ. ನೀವು ಬಲಿಯಾಗಲು ಬಯಸುವಿರ ಇಲ್ಲ ರಾಜ್ಯ ಮಾಡಲು ಬಯಸುವಿರಾ, ನಿಮ್ಮ ಆಯ್ಕೆಯ ಮೇಲೆ ನಿಂತಿದೆ. ಸಿಂಹನ್ನಾಗಲು ಬಯಸಿದರೆ, ನಿಮ್ಮ ಮೇಲೆ ಹೂಡಿಕೆ ಮಾಡಲು ಪ್ರಾರಂಭಿಸಿ.
ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.
Explore all our Posts by categories.